Agrahara Beedi Navoor Bantwal-574211
Gopalakrishna is a common Indian name, often associated with Lord Krishna. It is a blend of "Gopala" (protector of cows) and "Krishna" (a Hindu deity). Many poets, scholars, and spiritual leaders have carried this name. In literature, Gopalakrishna Adiga was a renowned Kannada poet. Temples dedicated to Gopalakrishna can be found across India. The name symbolizes devotion, wisdom, and leadership in Hindu tradition.
ಸುಮಾರು 700 ವರ್ಷಗಳ ಇತಿಹಾಸವಿರುವ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನು ಸಮರ್ಪಣೆ ಮಾಡುವ ಕಾರ್ಯಕ್ರಮ ಮಾ.16 ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ತಿಳಿಸಿದ್ದಾರೆ. ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ರಥ ಬೀದಿಯಲ್ಲಿ ವಿಜ್ರಂಭಣೆಯ ರಥೋತ್ಸವ ನಡೆಯುತ್ತಿತ್ತು. 1998 ರ ಬಳಿಕ ರಥ ಅಜೀರ್ಣ ಸ್ಥಿತಿ ಹೊಂದಿದ್ದರಿಂದ ರಥೋತ್ಸವ ನಿಲ್ಲಿಸಿ,ಪಲ್ಲಕ್ಕಿ ಉತ್ಸವ ನಡೆಸಿಕೊಂಡು ಬರಲಾಯಿತು. ಪ್ರಸ್ತುತ ಈಗ ಸುಮಾರು 42.ಲಕ್ಷ ವೆಚ್ಚದಲ್ಲಿ ಹೊಸ ರಥದ ನಿರ್ಮಾಣ ಮಾಡಲಾಗಿದೆ. ಮಾ.16 ರಂದು ಕೈಕಂಬ ಪೊಳಲಿ ದ್ವಾರದ ಬಳಿ ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆಯೊಂದಿಗೆ ಸ್ವಾಗತ ಮಾಡಲಾಗುವುದು, ಸರಪಾಡಿ ಕ್ರಾಸ್ ಮಣಿ ಹಳ್ಳ ಬಳಿಯಿಂದ ಪೂರ್ಣ ಕುಂಭ ಸ್ವಾಗತ ,ಭಜನೆ ,ಚೆಂಡೆ, ವಾದ್ಯ, ಘೋಷಣೆಗಳೊಂದಿಗೆ ದೇವಸ್ಥಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು
7:00 AM
12:00 PM
7:00 PM
Navoor, Bantwal, India
+91 9900254988
gopalakrishnatemple00@gmail.com